ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ನಗರದ ನಜರಬಾದ್ ಸರ್ಕಾರಿ ವಿಭಜಿತ ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅಧ್ಯಾಪಕರಾಗಿರುವ ಎಡೆಯೂರು ಸಮೀಉಲ್ಲಾ ಅವರು ‘ನೆನಪಿನ ಚಿತ್ತಾರಗಳು’ ಹಾಗೂ ‘ನೆನಪಿನ ಮಳೆಬಿಲ್ಲು’ ಎಂಬ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಇವು ಅವರ ವೃತ್ತಿಯಲ್ಲಿ ಕಂಡುಂಡ ನೆನಪುಗಳ ಮೆರವಣಿಗೆ!.