ಸರ್ಎಂವಿ ಜ್ಞಾನ ಮಾರಿಕೊಳ್ಳಲು ಇಷ್ಟಪಡಲಿಲ್ಲಸರ್ಎಂವಿ ಜ್ಞಾನ ಮಾರಿಕೊಳ್ಳಲು ಇಷ್ಟಪಡಲಿಲ್ಲ ಮೈಸೂರುಯಾವ ಪ್ರತಿಫಲಾಪೇಕ್ಷೆಯನ್ನೂ ಮಾಡದ ಸರ್.ಎಂ. ವಿಶ್ವೇಶ್ವರಯ್ಯ ಅವರು, ತಮ್ಮ ಜ್ಞಾನವನ್ನು ಮಾರಿಕೊಳ್ಳಲು ಇಷ್ಟಪಡಲಿಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಹೇಳಿದರು.ನಗರದ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಬುಧವಾರ ಆಯೋಜಿಸಿದ್ದ ಡಾ.ಡಿ.ಎಸ್. ಜಯಪ್ಪಗೌಡ ಅವರ ಆಂಗ್ಲ ಭಾಷೆಯ ಭಾರತ ರತ್ನ ಸರ್.ಎಂ.ವಿ ಪುಸ್ತಕದ ಕನ್ನಡ ಅನುವಾದ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.