ರೈತರು ವೈಜ್ಞಾನಿಕ ಶಿಫಾರಸು ಅಳವಡಿಸಿಕೊಂಡು ಗೊಬ್ಬರ ಬಳಸಿರೈತರು ವೈಜ್ಞಾನಿಕ ಶಿಫಾರಸುಗಳನ್ನು ಅಳವಡಿಸಿ, ಅರಿಶಿಣದಂತ ಬೆಳೆಯಲ್ಲಿ ರಸಗೊಬ್ಬರಗಳನ್ನು ಬಳಸಿದಾಗ ರಸಗೊಬ್ಬರಗಳಲ್ಲಿನ ಪೋಷಕಾಂಶಗಳು ಪೋಲಾಗಿ ನಷ್ಟ ಉಂಟಾಗದೇ, ನಿರ್ದಿಷ್ಟ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ದೊರೆತು ಬೆಳೆ ಬೆಳವಣಿಗೆ ಮತ್ತು ಇಳುವರಿ ಉತ್ತಮಗೊಂಡು ರೈತರಿಗೆ ಲಾಭ ಉಂಟಾಗುತ್ತದೆ ಎಂದು ರಾಷ್ಟ್ರೀಯ ಮಣ್ಣಿನ ಸಮೀಕ್ಷೆ ಮತ್ತು ಮತ್ತು ಭೂ ಬಳಕೆ ಯೋಜನೆ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ರಾಜೇಂದ್ರ ಹೆಗ್ಗಡೆ ಸಲಹೆ ನೀಡಿದರು.