ಕಬಳಿ ಬಸವೇಶ್ವರ ದೇಗುಲ ವಿವಾದ ಬಗೆಹರಿಸಿದ ನಿರ್ಮಲಾನಂದ ಶ್ರೀತಾಲೂಕಿನ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನ ವಿವಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಮಧ್ಯಸ್ಥಿಕೆಯೊಂದಿಗೆ ಸುಖಾಂತ್ಯಗೊಂಡಿದ್ದು, ಈ ಹಿಂದಿನ ಅರ್ಚಕರೇ ಪೂಜೆ ಮುಂದುವರಿಸುವಂತೆ ನಿರ್ಧರಿಸಲಾಗಿದೆ. ಶ್ರೀ ಕ್ಷೇತ್ರ ಕಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಪೂಜೆಗೆ ಸಂಬಂಧಿಸಿದಂತೆ ಅರ್ಚಕರಾದ ರೇಣುಕಾ ಆರಾಧ್ಯ ಕುಟುಂಬಸ್ಥರು ಕಾನೂನು ಮೊರೆಯನ್ನು ಹೋಗಿದ್ದರು. ಆದರೆ ಈ ಕಾನೂನು ಸಮರದಲ್ಲಿ ನ್ಯಾಯಾಂಗ ಇಲಾಖೆಯು ಅರ್ಚಕರ ಪರವಾಗಿ ತಡೆಯಾಜ್ಞೆ ನೀಡಿ ಪೂಜೆ ಮುಂದುವರೆಸುವಂತೆ ಆದೇಶಿಸಿತ್ತು.