ತಲೆ ತಗ್ಗಿಸಿ ಓದಿದವರು ತಲೆ ಎತ್ತಿ ಬದುಕುತ್ತಾರೆಸುಜ್ಞಾನದಿಂದ ಬೆಳೆದರೆ ಸಜ್ಜನರಾಗಿ ಆರೋಗ್ಯ, ಗೌರವ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ತಲೆತಗ್ಗಿಸಿ ಓದಿದವರು ತಲೆ ಎತ್ತಿ ಬದುಕುವರು ಎಂಬುದು ಗೊತ್ತಿಲ್ಲವೆ ಎಂದು ಉಪನ್ಯಾಸಕ ಹಾಗೂ ಬರಹಗಾರ ಹಳ್ಳಿವೆಂಕಟೇಶ್ ತಿಳಿಸಿದರು. ಪ್ರಪಂಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ರವರು ಹೆಚ್ಚು ಪುಸ್ತಕಗಳನ್ನು ಓದಿದವರು ಗ್ರಂಥಾಲಯವನ್ನು ಹೆಚ್ಚು ಬಳಕೆ ಮಾಡಿಕೊಂಡವರು. ಕುವೆಂಪು, ದ.ರಾ.ಬೇಂದ್ರೆ, ಎ. ಪಿ. ಜೆ. ಅಬ್ದುಲ್ ಕಲಾಂ, ರವಿಬೆಳಗೆರೆ ಇಂತಹವರೆಲ್ಲ ಜ್ಞಾನದಾಹದಿಂದ ಅಭ್ಯಸಿಸಿ ಮಹಾತ್ಮರು ಎಂದೆನಿಸಿಕೊಂಡರು ಎಂದರು.