ಸಾಮೂಹಿಕ ಕೃಷಿಯಿಂದ ರೈತರ ಬದುಕು ಸದೃಢ: ಶಾಸಕ ನರೇಂದ್ರಸ್ವಾಮಿಕೃಷಿ ಪದ್ಧತಿಯಲ್ಲಿ ರೈತರು ಹೊಸತನದತ್ತ ಹೊರಳಬೇಕು. ಸಾಂಘಿಕ ಕೃಷಿ ಚಟುವಟಿಕೆಯಿಂದ ಸಿಗಬಹುದಾದ ಲಾಭದತ್ತ ಆಲೋಚಿಸಬೇಕು. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯುವ ಏಕಬೆಳೆಯಿಂದ ಆಗುವ ಪ್ರಯೋಜನ, ಕೃಷಿ ಉತ್ಪನ್ನಕ್ಕೆ ಸಿಗುವ ಬೇಡಿಕೆ, ಅದರಿಂದ ಸಾಧಿಸಬಹುದಾದ ಆರ್ಥಿಕ ಬೆಳವಣಿಗೆ ಇವೆಲ್ಲದರ ಬಗ್ಗೆ ಎಲ್ಲರೂ ಕುಳಿತು ಚರ್ಚಿಸಿ, ಸಮಸ್ಯೆ, ಗೊಂದಲಗಳಿದ್ದರೆ ನಮ್ಮೆದುರು ಮುಕ್ತವಾಗಿ ಇಡಿ.