ಶಾಸಕ ಸಂಗಮೇಶ್ ಮತಾಂತರ ಹೊಂದಲಿ: ಸಿದ್ದಲಿಂಗ ಸ್ವಾಮೀಜಿ ಸವಾಲುಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ ಅವರು ಮುಂದಿನ ಜನ್ಮದವರೆಗೆ ಕಾಯದೆ ತಕ್ಷಣ ಯಾವುದಾದರೂ ಮಸೀದಿಗೆ ಹೋಗಿ ಮತಾಂತರಗೊಳ್ಳಲಿ. ಕೇವಲ ರಾಜಕೀಯಕ್ಕಾಗಿ ಅವರು ಈ ರೀತಿ ಹಿಂದೂ ಧರ್ಮವನ್ನು ಅವಹೇಳನ ಮಾಡಬೇಕಾಗಿಲ್ಲ ಎಂದು ಶಿವಸೇನಾ (ಏಕನಾಥ ಶಿಂಧೆ) ಕರ್ನಾಟಕದ ರಾಜ್ಯಾಧ್ಯಕ್ಷ, ಜೇವರ್ಗಿಯ ಶ್ರೀ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸವಾಲು ಹಾಕಿದ್ದಾರೆ.