ಕುಂದಾಪುರ: ಸಿದ್ದಾಪುರ ಗ್ರಾಮದಲ್ಲಿ ಒಂಟಿ ಆನೆ ಭೀತಿಸಿದ್ಧಾಪುರ ಗ್ರಾಮದೊಳಗೆ ಬಂದ ಆನೆ ಒಂದೆರಡು ಮನೆಗಳ ಪಕ್ಕದಲ್ಲಿ ಹಾದು ಹೋಗಿ ಕಾಡು ಸೇರಿದೆ. ಇದನ್ನು ಕಂಡು ಸ್ಥಳೀಯರು ಈ ಭಾಗದಲ್ಲಿ ಓಡಾಡುವುದಕ್ಕೆ ಹೆದರಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಸಿದ್ದಾಪುರ, ಹೊಸಂಗಡಿಯ ಅಂಗನವಾಡಿ ಮತ್ತು ಶಾಲೆಗೆ ರಜೆ ನೀಡಲಾಯಿತು ಮತ್ತು ಬುಧವಾರ ನಡೆಯಬೇಕಾಗಿದ್ದ ವಾರದ ಸಂತೆಯನ್ನೂ ಕೂಡ ರದ್ದುಪಡಿಸಲಾಗಿತ್ತು.