• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಗಾಣಿಗ ಸಮುದಾಯದಿಂದ ಶನಿದೇವರ ವೈಭವದ ಉತ್ಸವ
ಚನ್ನರಾಯಪಟ್ಟಣದ ಬಾಗೂರು ರಸ್ತೆಯಿಂದ ಪ್ರಾರಂಭಗೊಂಡ ಶನಿದೇವರ ಮೂರ್ತಿ ಹೊತ್ತ ಬೆಳ್ಳಿರಥ ಕೆ. ಆರ್‌. ವೃತ್ತ, ಹಳೇ ಬಸ್‌ನಿಲ್ದಾಣ, ಆಂಜನೇಯಸ್ವಾಮಿ ದೇವಸ್ಥಾನದ ಮಾರ್ಗವಾಗಿ ಕೋಟೆ ಬೀದಿ, ಹೊಸ ಬಸ್ ನಿಲ್ದಾಣದ ವರೆಗೆ ಚಂಡೆ, ವಾದ್ಯಗೋಷ್ಠಿ, ಮಹಿಳೆಯರಿಂದ ಭದ್ರಕಾಳಿ, ವೀರಭದ್ರನ ಕುಣಿತ, ಲಂಬಾಣಿ ಕುಣಿತ, ಚಂಡೆವಾದ್ಯ, ಮಂಗಳವಾದ್ಯದೊಂದಿಗೆ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶೃಂಗರಿಸಲಾಗಿತ್ತು. ಗಾಣಿಗರ ಶ್ರೀ ಶನಿದೇವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ಕಡೇ ಶನಿವಾರದ ಅಂಗವಾಗಿ ಶ್ರೀ ಶನಿದೇವರ ವೈಭವದ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.
ಕೃಷ್ಣ ರಾಧೆ ವೇಷಧರಿಸಿ ಕಂಗೊಳಿಸಿದ ಸರ್ಕಾರಿ ಶಾಲೆ ಪುಟಾಣಿಗಳು
ಹಾಸನ ನಗರದ ಚನ್ನಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಸಾಲಿನಿಂದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳು ಪ್ರಾರಂಭವಾಗಿದ್ದು, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊದಲ ವರ್ಷದಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳು ಕರಷ್ಣ, ರಾಧೆ ವೇಷ ಧರಿಸಿ ಹಾಡಿಗೆ ನೃತ್ಯ ಮಾಡುವ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ. ಸರ್ಕಾರಿ ಶಾಲೆಯೊಂದು ತನಗೆ ಸಿಗುವ ಅತ್ಯಲ್ಪ ಸಂಪನ್ಮುಲಗಳೊಂದಿಗೆ ಉತ್ತಮವಾಗಿ ಸಾಗುತ್ತಿದೆ.ಈಗ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಮುಂದಾಗಿರುವುದು ಇನ್ನು ಪ್ರೋತ್ಸಾಹ ಸಿಕ್ಕಿದಂತಾಗಿದೆ.
ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಿ
ನೀವು ಒಳ ಒಪ್ಪಂದ ಮಾಡಿಕೊಂಡು ಗಿಮಿಕ್ ರಾಜಕೀಯ ಮಾಡಿದಿರಿ, ನಿಮ್ಮ ಪಕ್ಷದ ಮತ್ತೊಬ್ಬರು ಇಲ್ಲಿಗೆ ಬರುತ್ತಿದ್ದಾರೆ ಎಂಬುದನ್ನು ಅರಿತು ನಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಈ ರೀತಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದೀರ.ಸುಳ್ಳು ಆರೋಪವನ್ನು ಮಾಡಬೇಡಿ. ನಮ್ಮ ಸದಸ್ಯರು ನಿಮ್ಮ ಹೇಳಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಹೊರಟರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ, ಬಸವರಾಜ್‌ರವರೇ ಹುಷಾರ್ ಇದು ಲಾಸ್ಟ್ ವಾರ್ನಿಂಗ್. ನೀವು ಹಿರಿಯರು ಮಾರ್ಗದರ್ಶನವನ್ನು ಕೊಡಿ ನಾನು ಸ್ವಾಗತಿಸುತ್ತೇನೆ ಎಂದು ಸಮಿವುಲ್ಲಾ ಎಚ್ಚರಿಕೆ ನೀಡಿದರು.
ದ್ವಾರಸಮುದ್ರ ಕೆರೆಗೆ ಶಾಶ್ವತ ನೀರು ಪೂರೈಕೆ
ದ್ವಾರಸಮುದ್ರ ಕೆರೆ ಮುಂಗಾರು ಮಳೆ ಹಾಗೂ ಏತ ನೀರಾವರಿ ಯೋಜನೆಯಿಂದ ಮೈತುಂಬಿ ಹರಿಯುತ್ತಿರುವುದು ಸಂತೋಷದ ವಿಚಾರ. ಈ ವರ್ಷದಲ್ಲಿ ಕೆರೆ ಭರ್ತಿಯಾಗಿರುವುದರಿಂದ ಹಳೇಬೀಡು, ಮಾದೀಹಳ್ಳಿ ಜಾವಾಗಲ್ ಮೂರು ಹೋಬಳಿಯ ರೈತರ ಜೀವನಾಡಿಯಾಗಿದೆ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಈ ವರ್ಷದಲ್ಲಿ ಕೆರೆ ಭರ್ತಿಯಾಗಿರುವುದರಿಂದ ಹಳೇಬೀಡು, ಮಾದೀಹಳ್ಳಿ ಜಾವಾಗಲ್ ಮೂರು ಹೋಬಳಿಯ ರೈತರ ಜೀವನಾಡಿಯಾಗಿದೆ ಎಂದರು.
ಸಕಲೇಶಪುರದ ಕ್ರೀಡಾಂಗಣಕ್ಕೆ ಬೇಕಿದೆ ಕಾಯಕಲ್ಪ
ಸಕಲೇಶಪುರ ಪಟ್ಟಣದಲ್ಲಿರುವ ಈಗಾಗಲೇ ಹದಗೆಟ್ಟಿರುವ ತಾಲೂಕು ಕ್ರೀಡಾಂಗಣದಲ್ಲಿ ಹೆಜ್ಜೆ ಇಟ್ಟಲೆಲ್ಲ ಇರುವೆ ಹುತ್ತಗಳಿದ್ದು ಮುಚ್ಚುವ ಯತ್ನವನ್ನು ತಾಲೂಕು ಆಡಳಿತ ನಡೆಸುತ್ತಿಲ್ಲ. ಪರಿಣಾಮ ಇರುವೆ ಹುತ್ತಕ್ಕೆ ಕಾಲು ಹಾಕಿ ಸಾಕಷ್ಟು ವಿದ್ಯಾರ್ಥಿಗಳು ಕಾಲಿಗೆ ಕಚ್ಚಿಸಿಕೊಂಡಿದ್ದರೆ, ಕ್ರೀಡಾಂಗಣದ ಸುತ್ತ ಇರುವ ಗಿಡಗಂಟಿಗಳು ವಿದ್ಯಾರ್ಥಿಗಳನ್ನು ಭಯಪಡಿಸುವಂತಿದೆ. ಇದಲ್ಲದೆ ಕ್ರಿಡಾಂಗಣದಲ್ಲಿ ಅಡಿಗಳಷ್ಟು ನೀರಿದ್ದು ನೀರು ಕೆಸರಿನಲ್ಲೆ ವಿದ್ಯಾರ್ಥಿಗಳು ಆಟ ಆಡಬೇಕಿದೆ. ಇದರಿಂದಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿರುವ ತಮ್ಮ ನೈಜ ಕೌಶಲ್ಯವನ್ನು ತೋರ್ಪಡಿಸಲು ಸಾಧ್ಯವಿಲ್ಲದಾಗಿದೆ. ಕ್ರೀಡಾಂಗಣದಲ್ಲಿ ಶೌಚಗೃಹವಿದ್ದರೂ ನೀರಿನ ಸೌಲಭ್ಯವಿಲ್ಲದ ಕಾರಣ ದೇಹಬಾಧೆ ತೀರಿಸಿಕೊಳ್ಳಲು ವಿದ್ಯಾರ್ಥಿಗಳು ಗಿಡಗಂಟಿಗಳ ಮೊರೆ ಹೋಗಬೇಕಿದೆ.
ಎಂಸಿಇ ವಿದ್ಯಾರ್ಥಿಗಳಿಂದ ಬೇಲೂರು ದೇಗುಲ ಸುತ್ತ ಸ್ವಚ್ಛತೆ
ಎಂಸಿಇ ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್, ಭಾರತ್ ಸೇವಾ ದಳದೊಂದಿಗೆ ಪಟ್ಟಣದ ಅಮೃತಲಿಂಗೇಶ್ವರ ಕಲ್ಯಾಣಿ ಆವರಣ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ಹಿಂಭಾಗ ವಾಹನಗಳ ನಿಲುಗಡೆ ಸ್ಥಳದಲ್ಲಿ ಇದ್ದ ಕಸಗಳನ್ನು ಸ್ವಚ್ಛ ಮಾಡಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಬೇಲೂರಿನ ಗ್ರೀನರಿ ಟ್ರಸ್ಟ್ ಹಾಗೂ ಭಾರತ್ ಸೇವಾ ದಳದೊಂದಿಗೆ ಬೇಲೂರು ದೇಗುಲ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗುಡಿಸಲು ನಿವಾಸಿಗಳಿಗೆ ಶೀಘ್ರದಲ್ಲೇ ನಿವೇಶನ ಮಂಜೂರು
ಕಾಲೇಜು ಮೈದಾನದಲ್ಲಿ ಇರುವ ೫೭ ಗುಡಿಸಲು ಇದು ವಿಶ್ವ ಪ್ರಖ್ಯಾತಿ ಬೇಲೂರು ಪ್ರವಾಸಿ ತಾಣವಾಗಿದ್ದು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ತೊಂದರೆಯಾಗುತ್ತಿರುವುದರಿಂದ ಅಲ್ಲಿರುವ ಗುಡಿಸಲು ನಿವಾಸಿಗಳನ್ನು ತೆರವುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಅದಕ್ಕೂ ಮೊದಲು ಸ್ಥಳಾಂತರ ಜಾಗದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕಿದ್ದು ರಸ್ತೆ, ಚರಂಡಿ, ಯುಜಿಡಿ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಗೌರವಯುತವಾಗಿ ಸ್ಥಳಾಂತರಿಸಲು ಯೋಜನೆ ರೂಪಿಸಬೇಕಿದೆ. ಅದಕ್ಕಾಗಿ ರಾಜೀವ್ ಗಾಂಧಿ ಹಾಗೂ ವಾಜಪೇಯಿ ನಿಗಮದ ಆಶ್ರಯ ಸಮಿತಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಅಧಿಕಾರಿಗಳ ಹಾಗೂ ಸಮಿತಿಯ ಸದಸ್ಯರ ಸಭೆ ಕರೆದು ತೀರ್ಮಾನಿಸಲಾಗಿದೆ ಎಂದು ಶಾಸಕ ಎಚ್‌ ಕೆ ಸುರೇಶ್‌ ತಿಳಿಸಿದರು.
ಡೀಸಿ ಕಚೇರಿ ಕಟ್ಟಡದಲ್ಲೆ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಸೃಷ್ಟಿ
ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಜನ್ಮದಿನಾಂಕವನ್ನು ಆಧಾರ್‌ ಲಿಂಕ್‌ಗೆ ಸೇರಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದಲ್ಲಿರುವ ಆಧಾರ್ ಕೇಂದ್ರದಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಅನುಶ್ರೀ ಎಂಬಾಕೆ ಸಿಕ್ಕಿಬಿದ್ದಿದ್ದು, ಅಕೆ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೆ ಆಧಾರ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಅನುಶ್ರೀ ಎಂಬುವರ ಬಳಿ ಹಣ ಕೊಟ್ಟರೇ ಸಾಕು ನಕಲಿ ಜನ್ಮದಿನಾಂಕವನ್ನು ಸೃಷ್ಠಿ ಮಾಡಲು ಖಾಸಗೀ ಇಂಟರ್‌ ಪಾರ್ಲರ್‌ಗೆ ವಿಳಾಸ ಹೇಳಿ ಕಳುಹಿಸಿ ಕೊಡುತ್ತಾರೆ. ಅಲ್ಲಿ ಸಿದ್ಧವಾದ ಮೇಲೆ ಈಕೆ ಆಧಾರ್‌ಗೆ ಲಿಂಕ್ ಮಾಡಿಕೊಡುವುದನ್ನು ಮೈಗೂಡಿಸಿಕೊಂಡು ಸಂಬಳದ ಜೊತೆ ಈ ರೀತಿಯ ದೇಶದ್ರೋಹಿ ಕೆಲಸ ಮಾಡಿ ಒಬ್ಬರಿಂದ ೫ ಸಾವಿರದಿಂದ ೧೦ ಸಾವಿರದವರೆಗೂ ಹಣ ಪಡೆಯುತ್ತಿದ್ದಳು.
ಗೌರಿಗಣೇಶ ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಸಭೆ
ಗೌರಿ ಗಣೇಶ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವುದರಿಂದ ಈ ಶಾಂತಿ ಸಭೆಯನ್ನು ಕರೆಯಲಾಗಿದೆ. ಉಭಯ ಸಮುದಾಯದವರು ಸೌಹಾರ್ದಯುತವಾಗಿ ಎರಡು ಹಬ್ಬಗಳಿಗೆ ಪರಸ್ಪರ ಸಹಕಾರವನ್ನು ನೀಡಿಕೊಂಡು ಆಚರಿಸುತ್ತೇವೆಂದು ತಿಳಿಸಿರುವುದು ಸಂತೋಷವಾಗಿದೆ ಎಂದು ಡಿವೈಎಸ್ಪಿ ಲೋಕೇಶ್ ಹೇಳಿದರು. ಎರಡು ವಿಶೇಷ ಹಬ್ಬಗಳಲ್ಲಿ ನಾವು ಹೆಚ್ಚಿನ ರಕ್ಷಣಾ ವ್ಯವಸ್ಥೆಗಾಗಿ ಹೊರ ಸಿಬ್ಬಂದಿಯನ್ನು ಬರಮಾಡಿಕೊಳ್ಳುತ್ತೇವೆ. ಎರಡು ಹಬ್ಬಗಳ ಆಚರಣೆಗೆ ನಮ್ಮಿಂದ ಸಂಪೂರ್ಣ ಸಹಕಾರ ಇರುತ್ತದೆ. ಕಳೆದ ವರ್ಷದಂತೆ ಇದ್ದ ನಿಯಮವನ್ನು ಈ ಬಾರಿಯೂ ಪಾಲಿಸಬೇಕು. ಅಗತ್ಯ ಬಿದ್ದಲ್ಲಿ ಮಹಲ್ಲವಾರು ಸಭೆ ಮಾಡುತ್ತೇವೆ. ಹಬ್ಬ ಸಮೀಪಿಸಿದಂತೆ ಇನ್ನೊಂದು ಸಭೆಯನ್ನು ನಡೆಸಲಾಗುವುದು. ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯವರು ಮತ್ತು ಮುಸ್ಲಿಂ ಜಮಾತ್ ಕಮಿಟಿಯವರು ಪರಸ್ಪರ ಸಹಕಾರದೊಂದಿಗೆ ಹಬ್ಬಗಳನ್ನು ಆಚರಿಸಿಕೊಂಡು ಹೋಗುವುದಾಗಿ ತಿಳಿಸಿದ್ದೀರಿ ಸಂತೋಷ ಎಂದರು.
ಸ್ವಯಂ ನಿಯಂತ್ರಣವೇ ಏಡ್ಸ್ ನಿಯಂತ್ರಣಕ್ಕೆ ದಾರಿ
ಎಚ್‌ಐವಿ ಸೋಂಕಿತರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಎಚ್‌ಐವಿ ಸೋಂಕಿತ ವ್ಯಕ್ತಿಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು. ಯಾವುದೇ ತಾರತಮ್ಯ ಮಾಡಬಾರದು ಎಲ್ಲರಂತೆ ಬದುಕಲು ಅವಕಾಶ ನೀಡಬೇಕು ಎಂದು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿ ಮಹೇಶ್‌ ತಿಳಿಸಿದರು. ಎಚ್‌ಐವಿ ಹರಡದಂತೆ ತಡೆಯಬೇಕಾದರೆ ಸ್ವಯಂ ನಿಯಂತ್ರಣ ಅಗತ್ಯ. ಸುರಕ್ಷಿತವಲ್ಲದ ಲೈಂಗಿಕ ಸಂಪರ್ಕ, ಸಂಸ್ಕರಿಸಿದ ಸಿರಿಂಜ್ ಮೂಲಕ ಮಾದಕ ದ್ರವ್ಯ ತೆಗೆದುಕೊಳ್ಳುವುದರಿಂದ ಹೆಚ್‌ಐವಿ ಹರಡುತ್ತದೆ. ಗರ್ಭಿಣಿಯರಲ್ಲಿ ಎಚ್‌ಐವಿ ಇದ್ದರೆ ಹುಟ್ಟುವ ಮಗುವಿಗೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
  • < previous
  • 1
  • ...
  • 351
  • 352
  • 353
  • 354
  • 355
  • 356
  • 357
  • 358
  • 359
  • ...
  • 553
  • next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್‌
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved