ಮಕ್ಕಳು ಶಿಕ್ಷಣವಂತರಾದರೆ ದೇಶ ಅಭಿವೃದ್ಧಿಮಕ್ಕಳು ಈ ದೇಶದ ಸಂಪತ್ತು. ಹಾಗಾಗಿ ಒಂದು ದೇಶ, ರಾಜ್ಯ, ಗ್ರಾಮ, ಅಭಿವೃದ್ಧಿ ಹೊಂದಬೇಕಾದರೇ ಅಲ್ಲಿನ ಮಕ್ಕಳು ಶಿಕ್ಷಣವಂತರಾದ ಮಾತ್ರ ಸಾಧ್ಯ ಎಂಬುವುದನ್ನು ಎಲ್ಲ ಮಕ್ಕಳು ಅರ್ಥೈಸಿಕೊಳ್ಳಬೇಕು ಎಂದು ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು.