ರೇಲ್ವೆ ಮತ್ತಷ್ಟು ಸುರಕ್ಷಿತಗೊಳಿಸಿ, ಸೌಲಭ್ಯ ಕಲ್ಪಿಸಲಿಸ್ವಾತಂತ್ರ್ಯ ನಂತರ ಅತಿಹೆಚ್ಚು ಹೊಸ ರೈಲುಗಳು ಬಂದರೂ ಹೊಸ ಹಳಿಗಳ ನಿರ್ಮಾಣ, ನವೀಕರಣ, ರಿಪೇರಿ, ಸಿಗ್ನಲ್, ನೈರ್ಮಲೀಕರಣ ವ್ಯವಸ್ಥೆ ಮಾತ್ರ ಮೇಲ್ದರ್ಜೆಗೇರಲಿಲ್ಲ. ಕೇಂದ್ರ ಸರ್ಕಾರ ತನ್ನ ಬಜೆಟ್ನಲ್ಲಿ ರೈಲ್ವೆ ಸುರಕ್ಷತೆ ಮತ್ತು ವಿಸ್ತರಣೆಗೆ ಆದ್ಯತೆ ಕೊಡಬೇಕು. ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು. ಕೆಲ ಮಾರ್ಗಗಳ ರೈಲುಗಳನ್ನು, ಕೆಲ ಮಾರ್ಗಗಳ ನಿರ್ವಹಣೆ, ಕಟ್ಟಡ ನಿರ್ಮಾಣವನ್ನು ಖಾಸಗಿಗೆ ವಹಿಸಲಾಗುತ್ತಿದೆ. ಇದನ್ನು ತಡೆಯಬೇಕು.