ನೆರವಿನ ನಿರೀಕ್ಷೆಯಲ್ಲಿ ಹಸಿದವರಿಗೆ ಅನ್ನ ಜೋಳಿಗೆ!ಯಾವುದಾದರೂ ಸಭೆ, ಸಮಾರಂಭ, ಗೃಹ ಪ್ರವೇಶ, ಜನ್ಮದಿನ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಬಳಿಕ ಉಳಿದ ಆಹಾರ ಹೊಟ್ಟೆ ಸೇರದೇ, ಕಸದ ತೊಟ್ಟಿ ಸೇರುತ್ತದೆ. ಹೀಗೆ ಅನಗತ್ಯವಾಗಿ ಹಾಳಾಗುವ ಆಹಾರವನ್ನು ತೆಗೆದುಕೊಂಡು ಹಸಿದವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯವನ್ನು ಹುಬ್ಬಳ್ಳಿಯ ಕರಿಯಪ್ಪ ಶಿರಹಟ್ಟಿ ಹಾಗೂ ಸುನಂದಾ ಶಿರಹಟ್ಟಿ ದಂಪತಿ ಮಾಡುತ್ತಿದ್ದಾರೆ.