ಧಾರಾಕಾರ ಮಳೆ: ವಸತಿ ನಿಲಯಗಳಿಗೆ ನುಗ್ಗಿದ ನೀರುನವಲಗುಂದ ಪಟ್ಟಣದ ಬಸ್ತಿ ಪ್ಲಾಟ್ ಹಾಗೂ ಹತ್ತಿರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯ, ರಾಣಿ ಚೆನ್ನಮ್ಮ ವಸತಿ ನಿಲಯಗಳಿಗೆ ಮಳೆ ನೀರು ನುಗ್ಗಿದೆ. ಆವರಣದಲ್ಲಿ ನೀರು ನಿಂತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ. ಹಾಸ್ಟೆಲ್ಗಳೆಲ್ಲ ನೀರಲ್ಲೇ ನಿಂತಂತಾಗಿವೆ. ಹೆಸ್ಕಾಂ ಉಪವಿಭಾಗದ ಕಾರ್ಯಾಲಯ, ನರಗುಂದ ರಸ್ತೆಯಲ್ಲಿರುವ ಎಲ್ಐಸಿ ಕಾರ್ಯಾಲಯ ಕೂಡ ಜಲಾವೃತವಾಗಿವೆ.