ಜೋಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿಯ ಚೆನ್ನಬಸವಣ್ಣನವರ ರಥೋತ್ಸವ ಫೆ. 24ರಂದು ನಡೆಯುವ ಹಿನ್ನೆಲೆ ಬುಧವಾರ ಪೂರ್ವ ಸಿದ್ಧತೆ ಸಭೆ ಕಾರವಾರ ಸಹಾಯಕ ಕಮಿಷನರ್ ಕನಿಷ್ಕ ಅಧ್ಯಕ್ಷತೆಯಲ್ಲಿ ನಡೆಯಿತು.ಜಾತ್ರಾ ಸಿದ್ಧತೆ, ಅವುಗಳ ಪಾಲನೆಯ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಪಿಡಿಒ ಆಗಿ ಉತ್ತಮ ಕಾರ್ಯನಿರ್ವಹಣೆ ಮೂಲಕ ತಮ್ಮ ಅವಧಿಯಲ್ಲಿ ಮೂರು ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಕಾರಣಿಕರ್ತರಾದ ಶಿರಸಿ ತಾಲೂಕಿನ ದೇವನಳ್ಳಿ ಗ್ರಾಪಂ ಪಿಡಿಒ ಕುಮಾರ ಚನ್ನಪ್ಪ ವಾಸನ್ ಅವರಿಗೆ ಜಿಪಂನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ ದೊರೆತಿದೆ.